ಅಲ್ಲಲ್ಲಿ ನಿಂತು

ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು
ದಾರಿ ಸಾಗುವುದೆ ಒಳ್ಳೆಯದು
ಎಲ್ಲಿಯೂ ನಿಲ್ಲದೆ ಏನನೂ ಕಾಣದೆ
ಧಾವಿಸುವುದೇ ತಲ್ಲಣ

ಕೆರೆಯ ನೋಡುವುದು ಕೊಳವ ನೋಡುವುದು
ಜಲಾಶಯದ ಬಳಿ ತಂಗುವುದು
ಗಿರಿಯನೇರುವುದು ಕಣಿವೆಯನಿಳಿಯುವುದು
ಬಳಸು ದಾರಿಗಳಲ್ಲಿ ಸರಿಯುವುದು
ಅದೂ ಯಾನವಲ್ಲವೇ

ಹೊಲಗಳಲಿ ಅಲೆಯುವುದು ಹುಲ್ಲಮೇಲೊರಗುವುದು
ಹಲವರುಗಳ ತಿರುಗುವುದು
ಮೆಲುದನಿಯಲಿ ಮಾತಾಡುವುದು ಮಕ್ಕಳ ಜತೆ ಆಡುವುದು
ಹಕ್ಕಿಗಳ ಕಲರವರಕೆ ಮನ ಸೋಲುವುದು

ಧ್ಯಾನ ಮಾಡುವುದು ಕರ್‍ಮ ಮಾಡುವುದು
ವಿದ್ಯಾದಾನ ಮಾಡುವುದು
ಆಗಾಗ ಮೌನ ವಹಿಸುವುದು

ಜಗ ದೊಡ್ಡದು ಗಗನ ದೊಡ್ಡದು
ಯುಗ ದೊಡ್ಡದು ಕಾಲ ಅಗಾಧ
ನಾನೆ ಪರಿಮಿತ

ಮೊಗೆದರೂ ಮುಗಿಯದ ಯಾವುದೋ ಒಂದು ಭಾವ
ಯಾವಾಗಲೂ ಇರುವುದು
ಇಂದು ನಿನ್ನೆಯದಲ್ಲ ಯಾರು ಕಂಡುದು ಅಲ್ಲ
ಹೆಸರು ಬೇಕಿಲ್ಲ ಗುರುತು ಬೇಕಿಲ್ಲ

ಅದು ಅಲ್ಲ ಇದು ಅಲ್ಲ ಯಾವುದೂ ಅಲ್ಲ
ಬಹುಳವೋ ಏಕವೋ ಎನ್ನುವುದೂ ಇಲ್ಲ
ಅನಾದಿ ಅನಂತ
ಅದ ಮರೆಯದೆ ಇರುವುದು
ಒಳ್ಳೆಯದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು
Next post ನಾಳೆಗಾಗಿ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys